ಆನ್ಲೈನ್ ಆನ್ಲೈನ್ ಏನಿದು ಹುಚ್ಚು.ಇದು ಜೀವಕ್ಕೆ ತಂದಿತು ಆಪತ್ತು. ಕೆಲವು ವರ್ಷಗಳ ಹಿಂದೆ ಆನ್ಲೈನ್ ಪಾಠದ ಪದ್ದತಿ ಅನಿವಾರ್ಯ ಆಗಿತ್ತು.ಆದರೆ ಆ ವಿಷ ಘಳಿಗೆ ಕಳೆದು ಮತ್ತೇ ನಾವೆಲ್ಲರೂ ಚೇತರಿಸಿಕೊಂಡು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದೇವೆ ಇದು ಸಂತಸದ ಸಂಗತಿ ಅಲ್ಲವೇ ಸ್ನೇಹಿತರೇ.
ವಿಜ್ಞಾನದ ಫಲದಿಂದ ಲೋಕ ಪ್ರಗತಿ ಆಗಿದೆ.ಅದಕ್ಕೆಲ್ಲಾ ನಾವು ಖಂಡಿತವಾಗಿಯೂ ಹೆಮ್ಮೆ ಪಡಬೇಕು.ದೂರವಾಣಿ , ದೂರದರ್ಶನ, ಅಂತರ್ಜಾಲ ಎಲ್ಲವೂ ಮಾನವ ಬುದ್ಧಿಯ ಮಾಯಾಜಾಲ.ಆದರೆ ಈಗಂತೂ ಇದರ ಹುಚ್ಚು ಅತಿಯಾಗಿದೆ, ರಸ್ತೆಯಲ್ಲಿ ಹತ್ತು ಜನರನ್ನು ಕಂಡರೂ, ಅಥವಾ ಬಸ್ಸಿನಲ್ಲಿ ಜನರನ್ನು ಕಂಡರೂ, ಚಿಕ್ಕ ಹುಡುಗರು, ದೊಡ್ಡವರು ಎಲ್ಲರ ಕೈಯಲ್ಲಿ ಫೋನ್ ಯಾರೊಂದಿಗೂ ಮಾತು ಇಲ್ಲ ಕತೆ ಇಲ್ಲ.ಈ ಫೋನಿನಿಂದ ನಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಇದೆ.ಇದು ತುಂಬಾ ಜನರಿಗೆ ತಿಳಿದಿದೆ ಆದರೂ ಕೈಯಿಂದ ಫೋನ್ ಮಾತ್ರ ಬಿಡುವುದಿಲ್ಲ.ದಿನಕ್ಕೆ ನಾಲ್ಕು ಗಂಟೆ ಆದರೂ ಫೋನಿನಿಂದ ದೂರ ಇರಲು ಪ್ರಯತ್ನಿಸಬೇಕು.ಅದರ ಬದಲು ಪ್ರಕೃತಿ ಸೌಂದರ್ಯ ವೀಕ್ಷಿಸಲು ಹೊರಗೆ ಸುತ್ತಾಡಲು ಹೋಗಬಹುದು.ಮನೆಯಲ್ಲಿರುವ ಪುಸ್ತಕ ಓದಬಹುದು.ಮನೆಯ ಜನರ ಜೊತೆ ಜೊತೆಗೆ ಹರಟೆ ಹೊಡೆದು ನಕ್ಕು ನಲಿಯಬೇಕು.ಮನೆಯ ಹಿರಿಯರು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸಬೇಕು.ಟಿವಿಯಲ್ಲಿ ಮೂರು ಸೋದರಿಯರು ಆನ್ಲೈನ್ನಲ್ಲಿ ಕೋರಿಯನ್ ಆಟ ಆಡಿ, ಮೂರನೇ ಮಹಡಿಯಿಂದ ಬಿದ್ದು ಸತ್ತು ಹೋಗಿದ್ದಾರೆ.ಇದರಲ್ಲಿ ಯಾರದು ತಪ್ಪು.ಈಗಿನ ಕಾಲದ ಹುಡುಗರದೇ ತಪ್ಪು ಇರಬಹುದು. ಸದಾ ಆನ್ಲೈನ್ ಆಟದಿಂದ ಅವರು ಅದರಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇದನ್ನು ತಪ್ಪಿಸಲು ಮನೆಯಲ್ಲಿ ಚಿಕ್ಕವರು ಇರುವಾಗಲೇ ಅವರ ಕಡೆಗೆ ಗಮನ ಹರಿಸಬೇಕು. ಇಷ್ಟೇ ಸಮಯ ಮೋಬೈಲ್ ನೋಡಬೇಕು, ಎಂದು ಅವರಿಗೆ ತಿಳಿಸಿ ಹೇಳಬಹುದು. ಚಿಕ್ಕಂದಿನಿಂದ ಇಂತಹ ಅಭ್ಯಾಸ ರೂಢಿಸಿಕೊಳ್ಳಬೇಕು. ಇದನ್ನು ತಂದೆ ತಾಯಿ ಗಮನ ಹರಿಸಬೇಕು.ಭವಿಷ್ಯದ ಕೂಸಾದ ಮಕ್ಕಳ ಮನ ಅರಳಲು ಬೇಕು ಒಳ್ಳೆಯ ಚಿತ್ರ, ಒಳ್ಳೆಯ ಮಾತು, ಹಾಡು,ಕಥೆಯ ಹೊನಲು ಬೇಕು. ಆದರೆ ದೊರೆತಿದ್ದು ಏನು? ಬರಡು ಮಾತು, ಅಶ್ಲೀಲ ಚಿತ್ರ,ಮನ ಕದಡುವ ವಾರ್ತೆ, ಮೋಬೈಲ್ ನ ಬಡಬಡಿಕೆಯ ವಿಚಿತ್ರ.ಬೇಕೇ ಇದು ಹಾಲು ಮನಸಿನ ಕಂದಮ್ಮಗಳಿಗೆ.ವಿಷವುಂಡು ನೀರಾಳಾದಾರು ಹೇಗೆ.ಪಾಲಕರೆ ನಿಮಗೆ ಇದು ಎಚ್ಚರಿಕೆಯ ಗಂಟೆ.ಕಾಲ ಮೀರುವ ಮೊದಲು ದಯವಿಟ್ಟು ದೂರವಿಡಿ ಟಿವಿ ಮೋಬೈಲ್ ತಂಟೆ.
ಲೇಖನ
ಶ್ರೀದೇವಿ ಓಂಕಾರ್
ಬೆಂಗಳೂರು 32





