ಶ್ರೀದೇವಿ ಓಂಕಾರ್
ಬೆಂಗಳೂರು 32
ಮನುಷ್ಯ ಜನ್ಮ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಎಲ್ಲರೂ ತಿಳಿದುಕೊಳ್ಳಬೇಕು.ಹಾಗೂ ಈಗಿನ ಕಾಲದಲ್ಲಿ ಮಕ್ಕಳು ಬೇಕು ಎಂದರೂ ಮಕ್ಕಳು ಹುಟ್ಟುವುದಿಲ್ಲ.ಮಕ್ಕಳು ಹೆತ್ತವರು ಪುಣ್ಯವಂತರು. ಅಂತಹ ಮಕ್ಕಳನ್ನು ಸಾಕಿ ಸಲಹುವದು ನಮ್ಮ ಕರ್ತವ್ಯ ಆಗಿದೆ.ಮಕ್ಕಳಿಗೆ ಒಳ್ಳೆಯ ಶಿಕ್ಷಣ, ತಿಳಿ ಹೇಳುವುದು, ಶಿಸ್ತಿನ ಜೀವನ ಎಲ್ಲವನ್ನೂ ಪಾಲಕರು ಹೇಳಿಕೊಡಬೇಕು.ಒಮ್ಮೆ ಜೀವ ಹೋದರೆ ತಿರುಗಿ ಬರುವುದೇ ಇಲ್ಲ.ಇದು ಎಲ್ಲರೂ ತಿಳಿದ ಸಂಗತಿ.ಹೀಗೆ ಇರುವಾಗ ನಿನ್ನೆ ಏಳು ಮಕ್ಕಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಇದರಲ್ಲಿ ಯಾರ ತಪ್ಪು ಇದೆ.ಖಂಡಿತ ತಂದೆ ತಾಯಿಯದು.ಇನ್ನೂ ಪಿಯುಸಿ ಓದುವ ಮಕ್ಕಳು ಕಾರು ಓಡಿಸಿಕೊಂಡು ಹೋಗಲು ಯಾಕೆ ಕೊಡಬೇಕು.ಅವರ ಹತ್ತಿರ ಲೈಸೆನ್ಸ್ ಇತ್ತೋ ಇಲ್ಲವೋ ಗೊತ್ತಿಲ್ಲ ಚಿಕ್ಕ ವಯಸ್ಸಿನ ಮಕ್ಕಳಿಗೆ ಬರೀ ಹುಚ್ಚು ಹುಮ್ಮಸ್ಸು ಇರುತ್ತದೆ.ಮಕ್ಕಳು ಹೋಗುವಾಗ ಹಿರಿಯರು ಏನು ಮಾಡುತ್ತಿದ್ದರು.ಅವರು ಹೇಗೆ ಕಳುಹಿಸಿದರು.ಕಾರು ಯಾರು ಓಡಿಸುತ್ತಾರೆ ಎಂದು ಅವರು ಯಾಕೆ ಗಮನ ಹರಿಸಲಿಲ್ಲ.ಹೀಗೆ ಚಿಕ್ಕ ಮಕ್ಕಳನ್ನು ಲಂಗು ಲಗಾಮು ಇಲ್ಲದೇ ಸ್ವಚ್ಛಂದವಾಗಿ ಹಾರಾಡಲು ಬಿಟ್ಟರೆ ಏನು ಹೇಳಬೇಕು. ಇಷ್ಟು ಮಕ್ಕಳು ಪ್ರಾಣ ಕಳೆದುಕೊಳ್ಳಲು ಮನೆ ಮಂದಿಯೇ ಕಾರಣ ಎಂದು ಖಡಾ ಖಂಡಿತವಾಗಿಯೂ ಹೇಳಬಹುದು.ಮಕ್ಕಳು ಎಷ್ಟೇ ಹಟ ಮಾಡಿದರೂ ಕೆಲವೊಂದು ವಿಷಯಗಳಲ್ಲಿ ಸ್ಟ್ರಿಕ್ಟ್ ಆಗಬೇಕು.ಅವರು ಹೇಳಿದ ಹಾಗೆ ಯಾವತ್ತೂ ಕೇಳಲೇ ಬಾರದು.ಹದಿಹರಯದ ವಯಸ್ಸಿನಲ್ಲಿ ಅವರಿಗೆ ಯಾವುದರ ಬಗ್ಗೆಯೂ ಗಮನ ಇರುವುದಿಲ್ಲ.ಬರೀ ತಮಗೆ ಹೇಗೆ ಬೇಕೋ ಹಾಗೆ ಮಾಡಲು ಹೋಗುತ್ತಾರೆ.ಐಷಾರಾಮಿ ಜೀವನ ಬೇಕು ಅವರಿಗೆ.ಅದಕ್ಕೆ ಮನೆಯವರು ಕಡಿವಾಣ ಹಾಕಬೇಕು.ಏನು ಬಂತು.ಬಾಳಿ ಬದುಕ ಬೇಕಾದ ಕಂದಮ್ಮಗಳು ಮಸಣ ಸೇರಿದ್ದಾರೆ.ಪಾಲಕರ ದುಃಖ ಕೇಳುವರು ಯಾರು. ತಪ್ಪು ಅವರದೇ ಆಗಿದೆ.





