Author:- ಶ್ರೀದೇವಿ ಓಂಕಾರ್
ನಮ್ಮ ಸಮಾಜ ಎತ್ತ ಸಾಗುತ್ತಿದೆ.ಟಿವಿ ಹಾಕಿದರೆ ಬರೀ ಆತ್ಮಹತ್ಯೆ, ರೇಪ್, ದರೋಡೆ ಏನಿದು.ಈಗಿನ ದಿನಗಳು ಎಂಥಾ ಭಯಾನಕ ಅಲ್ಲವೇ ಸ್ನೇಹಿತರೇ.ಚಿಕ್ಕ ಚಿಕ್ಕ ಮಕ್ಕಳು ಯಾವುದೇ ಭಯವಿಲ್ಲದೆ ನೇಣಿಗೆ ಶರಣಾಗುತ್ತಾರೆ.ಯಾರು ಎಲ್ಲಿ ತಪ್ಪುತ್ತಿದ್ದಾರೆ ಗೊತ್ತಿಲ್ಲ.ಮಕ್ಕಳಿಗೆ ಓದಿ ಎಂದರೆ ನೇಣು ಹಾಕಿಕೊಳ್ಳುತ್ತಾರೆ, ಟಿವಿ ನೋಡಬೇಡಿ ಎಂದರೆ ನೇಣಿಗೆ ಶರಣಾಗುತ್ತಾರೆ.ಮಕ್ಕಳಿಗೆ ಏನಾದರೂ ಹೇಳುವ ಹಕ್ಕು ಪಾಲಕರಿಗೆ ಇಲ್ಲವೇ.ಜೀವ ಕಳೆದುಕೊಂಡರೆ ಏನು ಸಾಧಿಸಿದಂತೆ ಆಗುತ್ತದೆ. ತಂದೆ ತಾಯಿ ಸರಿಯಾದುದನ್ನು ಹೇಳುತ್ತಾರೆ.ಅವರ ಮಾತು ಕೇಳಬೇಕು ಎಂದು ಈಗಿನ ಕಾಲದ ಮಕ್ಕಳಿಗೆ ಯಾಕೆ ತಿಳಿಯುವುದಿಲ್ಲ.ಜೀವ ಕಳೆದುಕೊಳ್ಳುವುದು ಎಷ್ಟು ಸುಲಭ ಆಗಿದೆ ಇವರಿಗೆ.ಇದಕ್ಕೆ ಕಾರಣ ಏನು ಇರಬಹುದು.ಟಿವಿಯಲ್ಲಿ ಪೇಪರಿನಲ್ಲಿ ಬರೀ ಇಂಥದ್ದನ್ನು ಕೇಳಿ, ಓದಿ ಅವರ ತಲೆಗೆ ಅದು ಹೊಳೆಯುತ್ತದೆಯೇ. ದಿಡೀರ್ ಎಂದು ಸಾಯುವ ನಿರ್ಧಾರ ಯಾಕೆ ತೆಗೆದುಕೊಳ್ಳಬೇಕು.ಅದರ ಬದಲು,” ಸರಿ ಸ್ವಲ್ಪ ಹೊತ್ತು ಟಿವಿ ನೋಡಿ ಓದುತ್ತೇವೆ ಎಂದು ಹೇಳಬಹುದು.ಪ್ರತಿ ದಿನ ಹೀಗೆ ವಿದ್ಯಾರ್ಥಿಗಳು ಜೀವ ಕಳೆದುಕೊಂಡರೆ ಏನು ಗತಿ.ಹತ್ತನೇ ತರಗತಿಯ ವಿದ್ಯಾರ್ಥಿ ಮೂರನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.ಯಾಕೆ ಹೀಗೆ.ಪ್ರಾಣ ಕಳೆದುಕೊಂಡರೆ ಮುಂದೆ ತಮ್ಮ ಪಾಲಕರ ಗತಿ ಏನು.ಎಂದು ಹುಡುಗರು ಯಾಕೆ ಆಲೋಚನೆ ಮಾಡುವುದಿಲ್ಲ.ಇದಕ್ಕೆ ತಜ್ಞರು ಏನು ಹೇಳುತ್ತಾರೆ.ಹೀಗೆ ಒಬ್ಬರನ್ನೊಬ್ಬರು ನೋಡಿ ಜೀವ ಕಳೆದುಕೊಳ್ಳುವುದು ಅವರಿಗೆ ಸುಲಭ ಅನ್ನಿಸಬಹುದು.ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡುವುದು ಹೇಗೆ.ತಂದೆ ತಾಯಿ ಮಕ್ಕಳನ್ನು ಗದರಿಸಲೇ ಬಾರದು ಎಂದರೆ ಹೇಗೆ ಆಗುತ್ತದೆ. ಈಗಿನ ಕಾಲದ ಹುಡುಗರು ಇಷ್ಟು ಸೂಕ್ಷ್ಮ ಆಗಲು ಕಾರಣವೇನು.ತಂದೆ ತಾಯಿ ಮಕ್ಕಳ,ಜೊತೆಗೆ ಇರಲು ಸಮಯ ಕೊಡುವುದಿಲ್ಲವೇ.ಅವರ ಮನದಾಳದ ಮಾತು ಕೇಳುವುದಿಲ್ಲವೇ.ಇದಕ್ಕೆ ಸಮಾಜ ಏನಾದರೂ ಪರಿಹಾರ ಕಂಡು ಹಿಡಿಯಬಹುದು.ಮಕ್ಕಳಿಗೆ ಭವಿಷ್ಯದ ಬಗ್ಗೆ ತಿಳಿ ಹೇಳುವುದು, ಹಾಗೆ ಆತ್ಮಹತ್ಯೆ ಹೇಡಿತನ ಎಂದು ಹೇಳಿ ಅವರೊಂದಿಗೆ ಸಮಾಲೋಚನೆ ಮಾಡಬೇಕು.ಈಗಿನ ಕಾಲದಲ್ಲಿ ಒಂದು ಅಥವಾ ಎರಡು ಮಕ್ಕಳು ಇರುತ್ತವೆ ಅವರು ಹೀಗೆ ತಪ್ಪು ದಾರಿ ಹಿಡಿದರೆ ಭವಿಷ್ಯ ಹೇಗೆ.ಚಿಕ್ಕಂದಿನಿಂದಲೂ ಮಕ್ಕಳ ಜೊತೆಗೆ ಇದ್ದು ಅವರೊಂದಿಗೆ ಆಟ, ಪಾಠ, ಕಥೆ, ಹರಟೆ, ಸುತ್ತಾಟ, ಒಳ್ಳೆಯ ಮಾತು, ಅವರಿಗೆ ಧೈರ್ಯ ಕೊಡುವುದು ಮಾಡಿದರೆ, ಆತ್ಮಹತ್ಯೆಯಂತಹ ಕೆಲಸ ಕಡಿಮೆ ಆಗಬಹುದು.ಇದನ್ನು ಪಾಲಕರು ಅರಿತುಕೊಳ್ಳಬೇಕು. ಬೆಲೆ ಬಾಳುವ ಮೋಬೈಲ್ ಕೊಡುವುದನ್ನು ಬಿಟ್ಟು,ಮಕ್ಕಳ ಮನದಾಳದ ಮಾತು ಕೇಳಿ ಅವರೊಂದಿಗೆ ಸಮಯ ಕಳೆಯಬೇಕು. ಏನಾದರೂ ಆಗಲಿ ನಮ್ಮೊಂದಿಗೆ ತಂದೆ ತಾಯಿ ಇದ್ದಾರೆ ಎಂದು ಮಕ್ಕಳಿಗೆ ಮನವರಿಕೆ ಆದರೆ, ಬಹುಶಃ ಆತ್ಮಹತ್ಯೆ ಕಡೆಗೆ ಗಮನ ಹೋಗಲಾರದು.





