ಜೂನ್ 5 ಈ ದಿನದ ವಿಶೇಷ ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವಂತಹ ವಿಷಯ ಅತಿ ಪ್ರಾಮುಖ್ಯತೆಯ ವಿಷಯ ಅದೇ ವಿಶ್ವ ಪರಿಸರ ದಿನಾಚರಣೆಯ ದಿನ.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಗಿಡ ಮರಗಳನ್ನು ಕಡಿಯದೆ ನೆಟ್ಟು ಬೆಳೆಸೋಣ
ಜೀವ ಜಲ ಸಂಪತ್ತನ್ನು ಮಾಲಿನ್ಯ ಮಾಡದೆ ಉಳಿಸೋಣ
ನಮ್ಮ ಪ್ರಕೃತಿ ಪರಿಸರದ ಮಾಲಿನ್ಯ ತಡೆಗಟ್ಟೋಣ
ಸಮೃದ್ಧಿಯ ಸ್ವಚ್ಛ ನಾಡನ್ನು ನಾವು ಕಟ್ಟೋಣ.
ಪರಿಸರವೆಂದರೆ ನಮ್ಮನ್ನು ಸುತ್ತುವರೆದು ನಮ್ಮನ್ನು ಸಂರಕ್ಷಿಸುತ್ತಿರುವ ಗಿಡಮರಗಳು ಕಾಡುಗಳು, ನದಿ ಒಟ್ಟಿನಲ್ಲಿ ಎಲ್ಲಾ ನಿಸರ್ಗವೂ ನಮ್ಮ ಪರಿಸರ. ಗಳ ಜೀವನದ ಮುಖ್ಯ ಆರೋಗ್ಯಕರ ಲಕ್ಷಣವೇ ಈ ಪರಿಸರ. ನಾವು ಬದುಕುತ್ತಿರುವ ಭೂಮಿ ಉಸಿರಾಟದ ಗಾಳಿ ಕುಡಿಯುವ ನೀರು ಎಲ್ಲವೂ ಪರಿಸರದ ಒಂದೊಂದು ಭಾಗಗಳು. ಭೂಮಿ ಕುಸಿಯಬಾರದೆಂದರೆ ಅತಿವೃಷ್ಟಿ ಅನಾವೃಷ್ಟಿ ಪ್ರವಾಹಗಳಿಂದ ಮುಕ್ತರಾಗಬೇಕೆಂದರೆ, ಜಾಗತಿಕ ತಾಪಮಾನ ಕಡಿಮೆಯಾಗಬೇಕೆಂದರೆ, ಉಸಿರಾಡಲು ಶುದ್ದ ಗಾಳಿ ಇರಬೇಕೆಂದರೆ ನಮ್ಮ ಪರಿಸರದ ಸಂರಕ್ಷಣೆಗೆ ಅತಿ ಮುಖ್ಯ ನಾವು ಅದರಲ್ಲಿ ಜಾಗೃತ ರಾಗಬೇಕು. ಪ್ರಕೃತಿಯ ಭಾಗವಾದ ಪಂಚಭೂತಗಳಲ್ಲಿ ದೇವರನ್ನು ಕಾಣುವ ನಮ್ಮ ಸಂಸ್ಕೃತಿಯಲ್ಲಿ ನಾವು ಪ್ರಕೃತಿಯ ರಕ್ಷಣೆಗೆ ಇಡೀ ಪ್ರಪಂಚಕ್ಕೆ ಮಾದರಿಯಾಗಬೇಕು.
ಮಾನವೆನಿಗಲ್ಲದೆ ಸಸ್ಯ ಪ್ರಾಣಿ ಜಗತ್ತಿಗೂ ಈ ಪರಿಸರದ ಅವಶ್ಯಕತೆ ಬಹಳವಾಗಿದೆ ಪರಿಸರವು ಅನೇಕ ಜನರಿಗೆ ಜೀವನೋಪಾಯವನ್ನು ಒದಗಿಸಿ ಕೊಡುತ್ತಿದೆ, ಈ ಪರಿಸರ ಮಾನವನ ಸಾಮಾಜಿಕ ಮಾನಸಿಕ ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಮಾನವನು ಪರಿಸರದ ಶಿಶು, ಸಮಾಜ ಜೀವಿ, ವೈವಿಧ್ಯಮಯ ನಿಸರ್ಗದ ಸೊಬಗಿನಲ್ಲಿ ವಾಸಿಸುವ ಸೌಲಭ್ಯವನ್ನು ಪಡೆದಿದ್ದಾನೆ,
ಆದರೆ ದೈವ ನಿರ್ಮಿತ ಅದ್ಭುತ ಪರಿಸರವನ್ನು ಅರಿತೋ ಅರಿಯದೆಯೋ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ, ಅಭಿವೃದ್ಧಿಯೆಂಬ ಕಾರಣಗಳಿಂದ ಈ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದ್ದೇವೆ. ಇದರ ಸಂರಕ್ಷಣೆ ಬಗ್ಗೆ ನಮ್ಮ ವರ್ತನೆ ನಗಣ್ಯವಾಗಿದೆ. ಇದನ್ನು ನೆನಪಿಸಿ ಜಾಗೃತಿ ಉಂಟು ಮಾಡುವ ಉದ್ದೇಶದಿಂದಲೇ 1972ನೇ ಇಸ್ವಿ ಜೂನ್ 5 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವೆಂದು ಘೋಷಿಸಿ ಆಚರಿಸುತ್ತಾ ಬಂದಿದ್ದೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲ ಮನುಷ್ಯನು ಹಣದಾಸೆಗೆ ಬಲಿಯಾಗಿ ಇಂತಹ ಮೂಲಭೂತ ಅಗತ್ಯವಾದ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಕಾಡು, ಗಿಡ ಮರಗಳನ್ನು ಕಡಿದು ವಿಶಾಲವಾದ ಮನೆಗಳು ವಸತಿಗೃಹಗಳು, ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಕಾರ್ಖಾನೆ ಹೊಗಗಳಿಂದ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾನೆ, ಎಲ್ಲಿಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆದು ಪರಿಸರವನ್ನು ಕುರೂಪಗೊಳಿಸುತ್ತಿದ್ದಾನೆ.
ನಮ್ಮ ಪರಿಸರ ನಮ್ಮ ಕರ್ತವ್ಯವಾಗಿದ್ದರೂ ಅದನ್ನು ಆಚರಿಸುವ ಒಂದು ದಿನವಾಗಿ ನಾವು ವಿಶ್ವ ಪರಿಸರ ದಿನವನ್ನು ಹಮ್ಮಿಕೊಂಡಿದ್ದೇವೆ.
ಇದರ ಆಚರಣೆ ಎಂದರೆ ಒಂದು ದಿನಕ್ಕೆ ಗಣ್ಯರನ್ನು ಆಹ್ವಾನಿಸಿ ಗಿಡ ನೆಟ್ಟು ಫೋಟೋ ಹಾಕಿ ರಾರಾಜಿಸಿದರೆ ಸಾಲದು, ಪ್ರತಿದಿನವೂ ಪರಿಸರ ಸಂರಕ್ಷಣೆಗೆ ಆಧ್ಯ ಗೌರವ ಕೊಡಬೇಕು.. ಶಿಕ್ಷಕರು ಮಕ್ಕಳಿಗೆ ಪ್ರಾಯೋಗಿಕಗಳೊಂದಿಗೆ ಚಿಕ್ಕಂದಿನಿಂದಲೇ ಇದನ್ನು ರೂಢಿ ಮಾಡಿಸಬೇಕು.
ಪರಿಸರ ನಾಶದಿಂದಲೇ ಭೂಸುನಾಮಿ ಬರದಂತಹ ವಿಕೋಪಗಳಿಗೆ ಬದಿಯಾಗುತ್ತಿದ್ದೇನೆ ಆಮ್ಲಜನಕದ ಕೊರತೆಯಿಂದ ಅನೇಕರ ಜೀವ ಹಾನಿಗಳಾಗುತ್ತಿವೆ. ಪ್ರಕೃತಿ ಪರಿಸರ ಹಾಗೂ ಜೀವಿಗಳ ಜೀವಜಾಲದ ಸರಪಳಿಯನ್ನು ನಾವು ಉಳಿಸಬೇಕಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮುಕ್ತಗೊಳಿಸಬೇಕಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರಾಧಿಯಾಗಿ ಪರಿಸರ ಸಂರಕ್ಷಣೆಯ ಹೊಣೆಯ ಅರಿವು ಹೆಚ್ಚಬೇಕಾಗಿದೆ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯದ ಘೋಷಣೆ ಎಲ್ಲಾ ಕಡೆಯೂ ದ್ವನಿಸಬೇಕಾಗಿದೆ. ಬೇಗದ ಆಧುನಿಕ ಬದುಕಿನಲ್ಲಿ ಪರಿಸರ ಕಡೆಗಣಿಸಿದರೆ ನಮ್ಮ ತಲೆಯ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ ಅದು ನಮ್ಮ ಜೀವಕ್ಕೆ ಮುಳುವಾಗಬಹುದು.
ಪ್ರಕೃತಿಯ ತಾಯಿಯಂತೆ ಮಾನವನಿಗೆ ಸರ್ವಸ್ವವನ್ನು ನೀಡಿ ಸಲಹುತ್ತಿದೆ ಇಂತಹ ನಿರ್ವ್ಯಾಜ ಪ್ರೀತಿಯ ಅಮೂಲ್ಯ ಪರಿಸರ ಸಂಪತ್ತನ್ನು ಉಳಿಸಿ ಬೆಳೆಸೋಣ. ಅದರ ಮಹತ್ವದ ಜಾಗೃತಿಯನ್ನು ಜನರಲ್ಲಿ ಉಂಟು ಮಾಡೋಣ.
ನಮ್ಮ ದುರಾಸೆಗೆ ಪರಿಸರ ನಾಶ ಮಾಡಿದರೆ ಮುಂದಿನ ಪೀಳಿಗೆಯ ಭವಿಷ್ಯ ಕಷ್ಟಕರವಾಗುತ್ತದೆ ಆದ್ದರಿಂದ ನಮ್ಮ ಜವಾಬ್ದಾರಿ ಯಾರಿದು ಇಂದಿನಿಂದಲೇ ಪರಿಸರ ರಕ್ಷಣೆಯ ಹೊಣೆ ಹೊರೋಣ, ಗಿಡ ಮರಗಳನ್ನು ಬೆಳೆಸಿ ಪ್ರೀತಿಸೋಣ ಪ್ರಕೃತಿಯನ್ನು ರಕ್ಷಿಸೋಣ ಅವುಗಳ ನಿಸ್ವಾರ್ಥ ಸೇವೆಯ ಭಾಗ್ಯವನ್ನು ನಾವು ಪಡೆಯೋಣ.

