ಹನೂರು: ಗಡಿ ತಾಲೂಕಿನಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿದ್ದು ಸಂಘಟನೆ ಮೂಲಕ ಪರಿಹಾರವನ್ನು ಮಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯೋನ್ಖರಾಗಿ ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಂ ಬಿ ಮಹೇಶ್ ಕುಮಾರ್ ತಿಳಿಸಿದರು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಹನೂರು ತಾಲೂಕು ನೂತನ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಹನೂರು ತಾಲ್ಲೂಕಿನಲ್ಲಿ ಪ್ರಥಮ ವಾಗಿ ನಮ್ಮ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯ ತಾಲ್ಲೂಕು ಸಂಘ ವನ್ನು ಉದ್ಘಾಟನೆ ಮಾಡುತ್ತಿರುವುದು ಸಂತೋಷ ವಿಷಯ ವಾಗಿದೆ, ನಮ್ಮ ಸಂಘಟನೆ, ಜಾತಿ ಧರ್ಮ, ರಾಜಕೀಯವನ್ನು ಮೀರಿ ಕನ್ನಡ ಭಾಷೆ, ನೆಲ, ಜಲದ ಉಳಿವಿಗಾಗಿ ಸದಾ ಹೋರಾಟ ವನ್ನು ಮಾಡುತ ಬಂದಿದ್ದೇವೆ ಯಾವುದೇ ಜಾತಿ, ತಾರತಮ್ಯ ವಿಲ್ಲದೆ ನಾವೆಲ್ಲರೂ ಕನ್ನಡಗಿರು ಎನ್ನುವ ಭಾವನೆ ಯನ್ನು ಬೆಳಿಸಿಕೊಳ್ಳಬೇಕು, ನಮ್ಮ ಹಕ್ಕು ಗಳನ್ನು ನಾವು ಪಡೆದುಕೊಳ್ಳಬೇಕಾದರೆ ಅದು ಸಂಘಟನೆ ಗಳಿಂದ ಮಾತ್ರ ಆದ್ದರಿಂದ ಈ ಭಾಗದ ಸಮಸ್ಯೆ ಗಳನ್ನು ಹಂತ ಹಂತ ವಾಗಿ ಸಂಘಟನೆ ಯ ಮೂಲಕ ಪರಿಸೋಣ.
ಪ್ರತಿಯೊಬ್ಬರೂ ಕೂಡ ಸಂಘಟನೆಯ ಕಾರ್ಯಕರ್ತರು. ಇಲ್ಲಿ ಅಧ್ಯಕ್ಷರು ಉಪಾಧ್ಯಕ್ಷರ ಅಂತ ಏನು ಇಲ್ಲ, ಎಲ್ಲರೂ ಸಂಘಟನೆಯ ಸದ್ಯಸರು. ಎಲ್ಲರೂ ಒಗ್ಗಟ್ಟಾಗಿ ಎಲ್ಲರಲ್ಲಿ ನಾವು ಒಬ್ಬರೆಂದು ಸಂಘಟನೆ ಕಟ್ಟೋಣ. ತಂಡವನ್ನು ಮುನ್ನಡೆಸಲು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ. ಸಂಘಟನೆಯಲ್ಲಿ ನಾನು ಕೂಡ ಒಬ್ಬ ಎಂದು ಕೆಲಸ ಮಾಡಿದರೆ ಮಾತ್ರ ಸಂಘಟನೆಯನ್ನು ಬಲಪಡಿಸಬಹುದು. ಈ ಭಾಗದಲ್ಲಿ ಏನು ಸಮಸ್ಯೆ ಇದೆ, ಏನಿದೆ? ಏನಿಲ್ಲ ಅನ್ನೋದು ಈ ಭಾಗದವರಿಗೆ ಮಾತ್ರ ಗೊತ್ತು ಆ ನಿಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಲು ಯಾವ ರೀತಿ ಹೋರಾಟ ಮಾಡಬೇಕೆಂದು ತಿಳಿದುಕೊಂಡು ನಂತರ ಸಮಸ್ಯೆ ಬಗೆಹರಿದಿದ್ದಲ್ಲಿ ಮಾತ್ರ ಹೋರಾಟ ಮಾಡಬೇಕು. ನಿಮ್ಮ ಸಂಘಟನೆಯ ಜೊತೆ ನಾವಿದ್ದೇವೆ ಎಂದು ನೂತನ ಪದಾಧಿಕಾರಿಗಳಿಗೆ ತಿಳಿಸಿದರು.
ಗೌತಮ್ ಶಾಲೆಯ ಕಾರ್ಯದರ್ಶಿ ರವೀಂದ್ರ ಮಾತನಾಡಿ, ಸಂಘಟನೆಗೆ ಒಳ್ಳೆ ಹೆಸರು ತರುವ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಎಂದರು. ಜಿಲ್ಲಾಧ್ಯಕ್ಷ ಪಿ. ಶಿವಸುಂದರ್ ಮಾತನಾಡಿದರು.
ತಾಲ್ಲೂಕು ಅಧ್ಯಕ್ಷ ಮಹೇಶ್ ಮಾತನಾಡಿ ಎಲ್ಲಾ ಸದಸ್ಯ ರುಗನ್ನು ಒಳಗೊಂಡು ನಮ್ಮ ಸಂಘಟನೆ ಮೂಲಕ ಇಲ್ಲಿನ ಸಮಸ್ಯೆ ಗಳನ್ನು ಬಗೆಹರಿಸೋಣ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ವಾಗಿದೆ ಈ ನಿಟ್ಟಿನಲ್ಲಿ ನೀವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸೋಣ ಎಂದರು,
ನಂತರ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ನೀಡುವುದರ ಮೂಲಕ ಸಂಘಕ್ಕೆ ಸೇರ್ಪಡೆಗೊಂಡರು.
ನೂತನ ಪದಾಧಿಕಾರಿಗಳು:
ತಾ. ಘ.ಗೌರವಧ್ಯಕ್ಷ ಮಹದೇವಸ್ವಾಮಿ,ಅಧ್ಯಕ್ಷ ಅಭಿಷೇಕ್,ಪ್ರಧಾನ ಕಾರ್ಯದರ್ಶಿ ಅಭಿಲಾಷ್,
ತಾ. ಕಾರ್ಯದರ್ಶಿ ಭರತ್, ಚೇತನ್ ಸಂಘ ಟಾನ ಕಾರ್ಯದರ್ಶಿ, ತಾ. ಖಜಾಂಚಿ ಸುರೇಶ್, ಸಂಚಾಲಕರಾದ ಪ್ರಭುಸ್ವಾಮಿ, ಜಯರಾಜು,ರವರು
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಕ್ಕೆ ಸೇರ್ಪಡೆ ಗೊಂಡರು.
ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ದೇವರಾಜು, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಹರ್ಷವರ್ಧನ್ ಶ್ರೀನಿವಾಸ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಅಶೋಕ್, ಜಿಲ್ಲಾ ಉಪಾಧ್ಯಕ್ಷ ಅನಂದ್ ಕುಮಾರ್, ಜಿಲ್ಲಾ ಗೌರವಾಧ್ಯಕ್ಷ ವೆಂಕಟಚಲ, ಜಿಲ್ಲಾ ಸಂಚಲಕ ಮೂರ್ತಿ, ಕೊಳ್ಳೇಗಾಲ ಘಟಕದ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷರಾದ ಅಜಯ್ ಹಾಗೂ ಉಮೇಶ್, ಸಂಘಟನಾ ಕಾರ್ಯದರ್ಶಿ ಅರುಣ್,ಖಜಂಚಿ ಮಾದೇವಸ್ವಾಮಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ, ತಾಲ್ಲೂಕು ಗೌರವ ಅಧ್ಯಕ್ಷ ಮಹಾದೇವಸ್ವಾಮಿ, ಸದಸ್ಯ ರಾದ ವಿನೋದ್ ರಾಜ್ (ಚಿನ್ನಿ) ಪ್ರಭುಸ್ವಾಮಿ ಎಂ, ಹನೂರು ಘಟಕದ ನೂತನ ಸದಸ್ಯರುಗಳು ಸೇರಿದಂತೆ ಮುಖಂಡರುಗಳು ಇನ್ನಿತರರು ಹಾಜರಿದ್ದರು.


