ಬಸವೇಶ್ವರ ವಾಣಿಜ್ಯ ,ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ರಾಜಾಜಿನಗರ. 2025-26 ನೆ ಸಾಲಿನಲ್ಲಿ ರಕ್ತದಾನ ಶಿಬಿರ ಹಾಗೂ ಏಡ್ಸ್ ತಿಳುವಳಿಕ ಕಾರ್ಯಕ್ರಮ ಮತ್ತು ದಂತ ಹಾಗೂ ಕಣ್ಣಿನ ತಪಾಸಣಾ ಕಾರ್ಯಕ್ರಮವನ್ನು25/02/2025 ಹಮ್ಮಿಕೊಳ್ಳಲಾಗಿದ್ದು, 25 ಯೂನಿಟ್ ರಕ್ತ ಸಂಗ್ರಹವಾಗಿದ್ದು ಮಾನವೀಯ ಸೇವೆಯ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸಂಘ ಹಾಗೂ clove ಡೆಂಟಲ್ ಮತ್ತು ವಾಸನ್ ಕಣ್ಣು ತಪಾಸಣಾ, ಫೋರ್ಟಿಸ್ ಆಸ್ಪತ್ರೆಯ ಸಹಾಯದೊಂದಿಗೆ ಪೂಜಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು.
ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ-ದೊಡ್ಡಣ್ಣನವರು, ಉಪಾಧ್ಯಕ್ಷರಾದ ಬಸವರಾಜು ಬಿರಾದಾರ್, ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಂಜುನಾಥ ರವರು ಹಾಜರಿಂದು ಈ ಕಾರ್ಯಕ್ರಮದಲ್ಲಿ ಮಹಿಳಾ ವಿದ್ಯಾರ್ಥಿ ಗಳು ಹೆಚ್ಚಾಗಿದ್ದು, ಅವರ ಸೇವಾ ಮನೋಭಾವವನ್ನು, ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರಶಂಷಿಸಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಭರತ್ ವಿ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಮಹದಾನವಾಗಿದ್ದು ಯುವಜನತೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿ ಇರಬೇಕು ಎಂದು ತಿಳಿಸಿದರು.
NSS/YRC ಕಾರ್ಯಕ್ರಮ ಅಧಿಕಾರಿಗಳಾದ ಗಿರೀಶ ವೈ ರವರು ಘಟಕಗಳ ಕಾರ್ಯ ಚಟುವಟಿಕೆಗಳ ಸಂಕ್ಷಿಪ್ತ ವಿವರಣೆ, ಸೇವಾ ಮನೋಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಅಗತ್ಯತೆಯನ್ನು ಮತ್ತು ಸ್ವಾಗತವನ್ನು ಮಾಡಿದರು. ಜೊತೆಗೆ ಸಹ ಕಾರ್ಯಕ್ರಮ ಅಧಿಕಾರಿ ಗಿರೀಶ ಪಿ ಹೆಚ್ ರವರು ಕನ್ನಡ ವಿಭಾಗ, ವಂದನಾರ್ಪಣೆಯನ್ನು ನೆರವೇರಿಸಿದ್ದು, ಲೈನ್ಸ್ ಕ್ಲಬ್ ನ ಸೂಪರ್ವೈಸರ್ ರಂಜಿತಾ ಮೇಡಂ ರವರ ತಂಡವು ಬಹಳ ಅಚ್ಚುಕಟ್ಟಾಗಿ ಸಹಕಾರವನ್ನು ನೀಡಿತು.
ಹಾಗೂ ಬಿಬಿಎಂಪಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದಿಂದ ಬಂದಂತಹ ಡಾಕ್ಟರ್ ವಾಸಂತಿ ಎಂ.ಡಿ
ಏಡ್ಸ್ ಮತ್ತು ಎಚ್.ಐ.ವಿ ಬಗ್ಗೆ ತಿಳುವಳಿಕೆ PPT ಮೂಲಕ ನೀಡಿದರು.
NSS ಹಾಗೂ YRC ಸ್ವಯಂಸೇವಕರಾದ ಕುಮಾರಿ ಮೇರಿ ಐಶ್ವರ್ಯ ನಿರೂಪಣೆಯನ್ನು ನೆರವೇರಿಸಿದರು .
YRC/RRC
ಸ್ವಯಂಸೇವಕರಾದ ಕುಸುಮ, ಶಶಾಂಕ್, ಧನುಷ್ ,ಶರಣಪ್ಪ, ಜಯಂತ್, ಯಶಸ್ವಿನಿ, ಶೃತಿ, ನರೇಶ್ ಇತರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ಊಟದ ವ್ಯವಸ್ಥೆಯನ್ನು ಶಿಸ್ತು ಬದ್ಧವಾಗಿ ನೆರವೇರಿಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿಗೆ ಕಾರಣರಾದರು.
ಜೊತೆಗೆ ಎಲ್ಲಾ ಆಡಳಿತದ ನಿರ್ದೇಶಕರು ಮತ್ತು ಎಲ್ಲಾ ಬೋಧಕವಿಭಾಗದ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉತ್ಸಾಹ ಭರಿತ ಹಾಗೂ ಶಿಸ್ತಿನ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.





