ಸಿರುಗುಪ್ಪ : ಜನಪ್ರತಿನಿಧಿಗಳಾಗಿ ನಾವು ಮಾಡುವ ಕೆಲಸವನ್ನು ಪತ್ರಕರ್ತರು ಮಾಡುತ್ತಿರುವುದಕ್ಕೆ ಅಭಿನಂದನೆ ಎಂದು
ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್.
ಸೋಮಲಿಂ ಗಪ್ಪ ತಿಳಿಸಿದರು. ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಕರ್ನಾಟಕ ಪತ್ರಕರ್ತರ ಸಂಘ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಇಲ್ಲಿಯವರೆಗೆ ಯಾವ ಪತ್ರಕರ್ತರ ಸಂಘಟನೆ ಕೂಡ ಬಡಬಗ್ಗರಿಗಾಗಿ ಉಚಿತ ಕಣ್ಣಿನ ಶಿಬಿರ ನಡೆಸಿಲ್ಲ. ತಮ್ಮ ಒತ್ತಡ ಎಷ್ಟೇ ಹೆಚ್ಚಿದ್ದರೂ ಕೂಡ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಹಿಂದಿನ ಹಿರಿಯರ ಕಾಲದಲ್ಲಿ ಮಿಶ್ರ ತಳಿಯ ಆಹಾರ ಪದ್ಧತಿಯನ್ನು ಜನ ಅನುಸರಿಸುತ್ತಿದ್ದರು. ಇದರಿಂದ ಯಾವುದೇ ರೋಗರುಜಿನ ಇರುತ್ತಿರಲಿಲ್ಲ. ಕಾಲ ಬದಲಾದಂತೆ ಹೈಬ್ರಿಡ್ ತಳಿಯ ಆಹಾರ ಪದ್ಧತಿ ಅನುಸರಿಸಿದ ಜನ ನಾನಾ ಕಾಯಿಲೆಗೆ ತುತ್ತಾಗುತ್ತಿರುವುದು ದುರಂತದ ಸಂಗತಿ. ಕಣ್ಣು ಬಹಳ ಮಹತ್ವವಾದದ್ದು. ಇಂತಹ ಕಾರ್ಯಕ್ರಮಗಳಿಂದ ಉಚಿತ ಚಿಕಿತ್ಸೆ ಪಡೆದು ನಿಮ್ಮ ಆರೋಗ್ಯ ಸರಿಪಡಿಸಿಕೊಳ್ಳಿ. ಪತ್ರಕರ್ತರ ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಸಹಾಯ ಸಹಕಾರ ನೀಡಲು ಸದಾಕಾಲ ಸಿದ್ಧನಿದ್ದೇನೆ ಎಂಬ ಭರವಸೆ ನೀಡಿದರು. ತದನಂತರ ಬಿಜೆಪಿ ತಾಲೂಕು ಅಧ್ಯಕ್ಷ ಕುಂಟನಾಳ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದರ ಜೊತೆಯಲ್ಲಿ ಅಂಧರ ಬಾಳಿಗೆ ಜ್ಯೋತಿ ನೀಡುತ್ತಿರುವುದು ತುಂಬಾ ಹೆಮ್ಮೆಯ ಸಂಗತಿ ಎಂದರು. ಆನಂತರ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಭೀಮರಾವ್ ಮಾತನಾಡಿ ಪತ್ರಕರ್ತರ ಸಂಘದ ಎಲ್ಲಾ ಸಮಾಜ ಸೇವೆಯ ಕಾರ್ಯಕ್ರಮಗಳಿಗೆ ಜನರ ಜನಪ್ರತಿನಿಧಿಗಳ ಹೃದಯಪೂರ್ವಕ ಸಹಾಯ ಸಹಕಾರ ಅತ್ಯಗತ್ಯ ಎಂದರು. ಕಾರ್ಯಕ್ರಮವನ್ನು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಷಣ್ಮುಖ ಭಂಡಾರಿ ಹಾಗೂ ಉಪಾಧ್ಯಕ್ಷ ಸಿರಿಗೇರಿ ಎನ್. ರಾಜ್ ಕುಮಾರ್ ನಿರೂಪಿಸಿ ನಿರ್ವಹಿಸಿದರು. ಕಣ್ಣಿನ ತಪಾಸಣೆಯನ್ನು ಶಂಕರ ಕಣ್ಣಿನ ಆಸ್ಪತ್ರೆಯ ನೀಲಾ ಪೂಜಾರಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ ಕಣ್ಣಿಗೆ ಬೇಕಾದ ಎಲ್ಲಾ ಚಿಕಿತ್ಸೆ ಹಾಗೂ ಸಲಕರಣೆ ಒದಗಿಸಲಾಗುವುದೆಂದರು. ಈ ವೇಳೆ ಸುಮಾರು 150ಕ್ಕೂ ಹೆಚ್ಚು ಜನ ಉಚಿತ ಕಣ್ಣಿನ ತಪಾಸಣೆಗೆ ಒಳಗಾದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬ್ ಸಾಬ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ
ಮಲ್ಲೇಶಪ್ಪ,ಜಿಲ್ಲಾ ಎಸ್ಸಿ ಮೋರ್ಚಾ ಮೇಕೆ ವೀರೇಶ್,
ಹಿರಿಯ ಪತ್ರಕರ್ತರಾದ ಅಬ್ದುಲ್ ನಬಿ ಸಾಬ್,
ನಗರಸಭೆ ಸದಸ್ಯರಾದ ವೆಂಕಟೇಶ್,
ಬಿಜೆಪಿ ಮುಖಂಡರಾದ ವೀರನಗೌಡ ,ಗಂಗಾಧರ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಪ್ರಧಾನ ತಾಲೂಕು ಘಟಕದ ಪದಾಧಿಕಾರಿಗಳಾದ
ಶ್ರೀನಿವಾಸ್ ಪತ್ತಾರ,
ಮಹಮ್ಮದ್ ಇಬ್ರಾಹಿಂ,
ಮಹಮ್ಮದ್, ನೌಶದ್
ಶ್ರೀಮತಿ ತರಂಗಿಣಿ,ನೂರ್ ಬಾಷಾ,ರಾಘವೇಂದ್ರ, ಕೆಬಿ .ಚೌಡಿಕೆ ಲಕ್ಷ್ಮಣ ಸೇರಿದಂತೆ ಸುಮಾರು ನೂರಾರು ಜನ ಭಾಗವಹಿಸಿದ್ದರು.






