ವಿಶೇಷ ವರದಿ: ಎನ್ ರಾಜಕುಮಾರ ಸಿರಿಗೇರಿ
ಶಾಲಾ ಕಾಲೇಜು, ಪಶುವೈದ್ಯಾಲಯ,ಕೃಷಿ ಇಲಾಖೆ, ಪೊಲೀಸ್ ಠಾಣೆ, ಸೇರಿದಂತೆ ಸುತ್ತಮುತ್ತಲ
ಹಳ್ಳಿಯ ಸುಮಾರು 18ರಿಂದ 20 ಗ್ರಾಮಗಳಿಗೆ ಮೂಲ ಕೇಂದ್ರಬಿಂದು ಎನಿಸಿಕೊಂಡಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮ. ಈ ಊರಲ್ಲಿ ಎಂಪಿ ಪ್ರಕಾಶ ಕಾಲಘಟ್ಟದಲ್ಲಿ ಇಲ್ಲಿನ ಜನತೆ ಸತತವಾಗಿ ಎರಡು ಬಾರಿ ಸಿರಿಗೇರಿ ಗ್ರಾಮಸ್ಥರಾದ ರೇವಣಸಿದ್ದಯ್ಯ ಸ್ವಾಮಿ ಎಂಬುವವರನ್ನು ಎರಡು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಅಲ್ಲದೆ ಇದೇ ಗ್ರಾಮದವರು ಸತತವಾಗಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಹಿರಿಯರಿ ಗ್ರಾಮಸ್ಥರನ್ನೇ ಸದಸ್ಯರಾಗಿ ಆಯ್ಕೆ ಮಾಡಿ ಗ್ರಾಮದಿಂದ ವಿಧಾನಸೌಧದವರೆಗೂ ಕಳುಹಿಸಿಕೊಟ್ಟುವುದು ಇತಿಹಾಸ. ಇಷ್ಟು ಮಾತ್ರವಲ್ಲ ಸಿರಿಗೇರಿ ಸುತ್ತಮುತ್ತಲು ಇತಿಹಾಸ ಸಾರುವ ಬೆಟ್ಟಗುಡ್ಡಗಳಿವೆ. ಪುರಾತನ ಕಾಲದ ಕೆರೆ ಬಾವಿ ಕಟ್ಟೆಗಳಿವೆ. ಈ ಊರು ಸಾಹಿತ್ಯ, ಪುರಾಣ ಪುಣ್ಯ ಕಥೆ, ಸಂಗೀತ, ಸಿರಿಧಾನ್ಯ ಬೆಳೆದ ರೈತರ ಜೀವನಾಡಿಯಾಗಿದೆ. ಆದರೂ ಸಹ ಸಮಸ್ಯೆಗಳ ಮಹಾಪೂರ ಹೆಚ್ಚುತ್ತ ಹೋಗುತ್ತಿದೆ.
*ಸಮಸ್ಯೆ :* ಗ್ರಾಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹತ್ತು ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಊರು ಕೆರೆ, ಅಕ್ಕ ತಂಗಿ ಕೆರೆ, ವಕ್ರಾಣಿಕೆರೆ, ಸ್ಮಶಾನ ಕೆರೆ, ಊರು ಬಾವಿ ಸೇರಿದಂತೆ ಅನೇಕ ಜಲ ಮೂಲ ಸಂಪನ್ಮೂಲ ಹಾಗೂ ಧಾರ್ಮಿಕ ಕ್ಷೇತ್ರಗಳಿವೆ. ಆದರೂ ಸಹ 1973 ರಿಂದ 2025 ರವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎನ್ನುವುದು ಸಿರಿಗೇರಿ ಮಾತ್ರವಲ್ಲ ಸುತ್ತ ಮುತ್ತಲಿನ ಹತ್ತಾರು ಹಳ್ಳಿಯ ಜನರ ಮನದಾಳದಲ್ಲಿ ಆಕ್ರೋಶದ ಮಾತುಗಳು ಕಿಡಿ ಹೊತ್ತಿಸಿವೆ. ಊರು ಕೆರೆಯಲ್ಲಿ ಕಾಲಿಟ್ಟರೆ ಸಾವೇ ಗತಿ. ಅಕ್ಕ ತಂಗಿ ಕೆರೆ ಹೆಸರಿಗೆ ಮಾತ್ರ ಅಮೃತ ಸರೋವರ. ಆದರೆ ಜನಜಾನುವಾರಗಳಿಗೆ ಇಲ್ಲಿಲ್ಲ ಜಾಗದ ಮೂಲ. ಕಂಪ್ಲಿ,ಕುರುಗೋಡು,ಬಳ್ಳಾರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರ ಬವಣೆಯಂತೂ ಹೇಳತಿರದು. ಸುತ್ತಮುತ್ತಲಿನ ನೂರಾರು ಪ್ರಯಾಣಿಕರಿದ್ದರು ಸಹ ಬಸ್ ವ್ಯವಸ್ಥೆಯೇ ಇಲ್ಲ.ಊರಿಗೊಬ್ಬ ಚೆಲುವಪ್ಪ ಎಂಬಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, ಒಬ್ಬ ವೈದ್ಯರು ಮಾತ್ರ ಚಿಕಿತ್ಸೆ ನೀಡುವ ಪರಿಸ್ಥಿತಿ ಉಂಟಾಗಿದೆ. ಅತಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗತಿ. ಉಳ್ಳವ ಬದುಕಿಕೊಂಡ. ಬಡವ ಬದುಕು ಕಳೆದುಕೊಂಡ ಎಂಬಂತೆ ಜೀವನ ಮರಣದ ಬಗ್ಗೆ ರೋಗಿಗಳು ಪ್ರತಿನಿತ್ಯ ಒದ್ದಾಡುವಂತಾಗಿದೆ. ಊರಿಗೊಂದು ಅಗಸೆ ಇರುವುದು ಸಾಮಾನ್ಯ. ಈ ಅಗಸೆಯ ದಾರಿಯುವುದಕ್ಕೂ ಹೊಲಸು ನೀರು ಕೆರೆಯಂತೆ ಹರಿಯುತ್ತಿದ್ದು ಮಲಿನ ವಾತಾವರಣ ಸೃಷ್ಟಿಯಾಗಿದೆ. ರೋಗ ರುಜಿನ ಹೆಚ್ಚಾಗಿ ಇಲ್ಲಿನ ನಿವಾಸಿಗಳು ಸ್ಮಶಾನದ ಬಾಗಿಲು ತಟ್ಟಿದ್ದಾರೆ. ಅದೆಷ್ಟೋ ಶಾಸಕರು ಆಯ್ಕೆಯಾಗಿದ್ದರು ಸಹ ಸಮಸ್ಯೆಗೆ ಪರಿಹಾರ ಮಾತ್ರ ಶೂನ್ಯ ಎಂಬಂತಾಗಿದೆ. ಈ ಬಗ್ಗೆ ಇಲ್ಲಿನ ಸಾಹಿತ್ಯಗಾರರು, ಸಂಘ ಸಂಸ್ಥೆ, ಸಮಾಜ ಚಿಂತಕರು ನಾನಾ ಭಾರಿ ಧರಣಿ ಸತ್ಯಾಗ್ರಹ ಕೊನೆಗೆ ನಿರಂತರ ಉಪವಾಸ ಸತ್ಯಾಗ್ರಹ ಮಾಡಿದರು ಸಹ ಯಾವುದೇ ಪರಿಹಾರ ಸಿಗದೇ ಇದ್ದದ್ದು ಜನರ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಬಿಜೆಪಿ,ಕಾಂಗ್ರೆಸ್, ಜನತಾದಳ ಮೂರು ಪಕ್ಷದ ಶಾಸಕರನ್ನು ಈ ಊರಿನ ಜನ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಕಳಿಸಿದ್ದರು ಸಹ ಕ್ಯಾರೆ ಎನ್ನುತ್ತಿಲ್ಲ. ಅದೆಷ್ಟೋ ಜನ ಇಂಜಿನಿಯರ್ ಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸರ್ವೆ ಗೊಂಬೆಯಾಗಿದ್ದಾರೆ. ಆದರೆ ಕಾರ್ಯರೂಪಕ್ಕೆ ಇಳಿಸಿಲ್ಲ.
ಇಂತಹ ವಿಳಂಬ ನೀತಿ ಇದೇ ರೀತಿ ಮುಂದುವರೆದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುವುದು ಅನಿವಾರ್ಯ ಎಂದು ದಲಿತ ನಾಯಕ ಲಕ್ಷ್ಮಣ ಹೆಚ್. ಬಂಡಾರಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ತಾಳ್ಮೆಗೂ ಒಂದು ಇತಿಮಿತಿ ಇದೆ. ಸಿರಿಗೇರಿ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಹೋರಾಟದ ಮೂಲಕ ನ್ಯಾಯಾಲಯದ ಮೆಟ್ಟಿಲು ಏರುವುದಕ್ಕೆ ಸಿರಿಗೇರಿಯ ಎಲ್ಲಾ ಸಂಘ ಸಂಸ್ಥೆಗಳ ಗ್ರಾಮಸ್ಥರ ನೆರವಿನೊಂದಿಗೆ ನಾವು ಕೋರ್ಟು ಕೇಸಿಗೂ ಸಿದ್ಧರಿದ್ದೇವೆ ಎಂದು ಸಾಹಿತಿ
ಎನ್.ಕುಮಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಿಸಿದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.






