ಸಿರಿಗೇರಿ ಮಾ 13:ಸಮೀಪದ ಶಾನವಾಸಪುರ ಗ್ರಾಪಂ ನಿಂದ 2025-26ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯನ್ನು ಶ್ರೀ ಸುಂಕ್ಲಮ್ಮ ದೇವಿ ಸಭಾ ಮಂಟಪದಲ್ಲಿ ನಡೆಸಲಾಯಿತು. ಪ್ರಾರಂಭದಲ್ಲಿ ಪರಿಶೋಧನ ತಾಲೂಕು ಸಂಯೋಜಕ ರಮೇಶ್ ನರೇಗಾ ಹಾಗು 15ನೇ ಹಣಕಾಸು ಯೋಜನೆಯ ಕಾಮಗಾರಿ ವಿವರ ಒದಗಿಸಿದರು.
ಆ ನಂತರ ಗ್ರಾಪಂ ಪಿಡಿಒ ವೀರೇಶ್ ನರೇಗಾ ಯೋಜನೆ ಅಡಿ ಅರಣ್ಯ ಕೃಷಿ, ತೋಟಗಾರಿಕೆ, ವೈಯಕ್ತಿಕ ಕಾಮಗಾರಿಗಳನ್ನು ನೀಡಿ ಆದಷ್ಟು ಗುರಿ ತಲುಪಿದ್ದೇವೆ ಅಲ್ಲದೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ನಿರ್ವಹಣೆ ಮಾಡಲಾಗಿದೆ ಎಂದರು. ಇದೇ ವೇಳೆ ಕೆಲ ಮಾಜಿ ಸದಸ್ಯರು ಬದು ನಿರ್ಮಾಣ ಹಾಗು ವಡ್ಡು ನಿರ್ಮಾಣ ಕಾಮಗಾರಿ ಕ್ಯೆಗೊಂಡಿಲ್ಲ ಎಂದು ತಕರಾರು ಎತ್ತಿದರು.
ಅಲ್ಲದೆ ಇಲ್ಲಿನ 1ನೇ ವಾರ್ಡಿನ ಒಳ ಚರಂಡಿ ಅವ್ಯಜ್ಞಾನಿಕವಾಗಿದ್ದು ಸ್ಥಳ ಪರಿಶೀಲಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಯ ಎ. ಡಬ್ಲೂ ಇಂಜಿನಿಯರ್ ರಾಹುಲ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಪ್ರಮುಖರಾದ ಎಲ್. ಮಾರೇಶ, ಮಂಜಪ್ಪಗೌಡ, ರುದ್ರಮುನಿ, ದುರ್ಗಪ್ಪ,ಉಪ ವಲಯ ಅರಣ್ಯ ಇಲಾಖೆಯ ಕೆಂಚಪ್ಪ,ಪರಿಶೋಧನ ಸಮಿತಿಯ ವೀರೇಶ, ಪಂಪಾಪತಿ, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿದಂತೆ ಸಿಬ್ಬಂದಿ ಗ್ರಾಮಸ್ಥರು ಇದ್ದರು.






