ಸಿಂಧನೂರು — ತಾಲೂಕಿನ ಕೆ ಹಂಚಿನಾಳ ಕ್ಯಾಂಪಿನ ಶಾಂತಿನಗರದ ಶ್ರೀಧರ ಪಬ್ಲಿಕ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ” ಸೇವಾ ತಿಳುವಳಿಕಾ ಕಾರ್ಯಗಾರ “ದ ಸೇವಾ ಕಾರ್ಯದಲ್ಲಿ ಭಾಗವಹಿಸಿ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ವಿಶೇಷ ಅನುಭವವನ್ನು ತೆಗೆದುಕೊಂಡರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಿಂದ ದವಸ ಧಾನ್ಯ ಹಾಗೂ ಇನ್ನಿತರ ವಸ್ತುಗಳನ್ನು ಆಶ್ರಮಕ್ಕೆ ಒಪ್ಪಿಸಿ ಶ್ರೀಧರ್ ಪಬ್ಲಿಕ್ ಸ್ಕೂಲ್ ಹಾಗೂ ವಿದ್ಯಾರ್ಥಿಗಳಿಂದ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ ಚನ್ನಬಸವ ಸ್ವಾಮಿ ಹಿರೇಮಠ ಅವರು ವಿದ್ಯಾರ್ಥಿಗಳಲ್ಲಿ ಹಲವಾರು ಸೇವಾ ಸಂದೇಶಗಳ ಮೂಲಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ಶ್ರೀಧರ್ ಪಬ್ಲಿಕ್ ಸ್ಕೂಲ್ ಸಿ. ಇ. ಓ. ಗಳಾದ ವರ್ಷಾ ಸೂಗೂರು ಮಾತನಾಡಿ ಇಂದು ಕಾರುಣ್ಯ ಆಶ್ರಮದಲ್ಲಿನ ಈ ವಾಸ್ತವ ಸ್ಥಿತಿಯನ್ನು ನೋಡಿ ವಿದ್ಯಾರ್ಥಿಗಳು ವಿಶೇಷ ಅನುಭವದ ಪಾಠವನ್ನು ಪಡೆದುಕೊಂಡಿದ್ದು ಸಮಾಜದಲ್ಲಿನ ಹಿರಿಯರನ್ನು ಹೆತ್ತವರನ್ನು ಕಡೆಗಣಿಸುವುದಿಲ್ಲ ಎನ್ನುವ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ನಮಗೆ ಸಂತೋಷವನ್ನುಂಟು ಮಾಡಿದೆ. ನಿಮ್ಮ ಶಿಕ್ಷಣ ನಮ್ಮ ಸಂಸ್ಕೃತಿ ಸಂಸ್ಕಾರ ಉಳಿಸಿ ದೇಶಕ್ಕೆ ಮಾದರಿಯಾಗಬೇಕು. ನಿಮ್ಮ ಹೆತ್ತವರು ಅದೆಷ್ಟೋ ಕನಸುಗಳ ಮಧ್ಯೆ ನಿಮಗೆ ಶಿಕ್ಷಣ ಕೊಡಿಸುತ್ತಾರೆ. ಈ ನಿಮ್ಮ ಶಿಕ್ಷಣವು ನಿಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವಂತಾಗಬಾರದು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಮಾತನಾಡಿ ವಿದ್ಯಾರ್ಥಿಗಳಲ್ಲಿ ಹಲವಾರು ಸಂದೇಶಗಳ ಅರಿವು ಮೂಡಿಸಿದರು. ನಂತರ ಮುಖ್ಯೋಪಾಧ್ಯಾಯರಾದ ಮಂಜುನಾಥ ಸೂಗೂರು ಇಂದು ಕಾರುಣ್ಯ ಆಶ್ರಮಕ್ಕೆ ತಮ್ಮೆಲ್ಲರನ್ನು ಕರೆತಂದಿರುವದು ಬರೀ ತೋರಿಸುವದಕ್ಕಲ್ಲ ಇಲ್ಲಿಯ ಹಲವಾರು ಅನುಭವಗಳು ಮತ್ತು ಸಂದೇಶಗಳನ್ನು ತಾವು ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ತಾವುಗಳು ಆದರ್ಶ ವ್ಯಕ್ತಿಗಳಾಗಬೇಕು. ನೀವುಗಳು ಪಡೆಯುವ ಶಿಕ್ಷಣ ಹೆತ್ತವರ ಘನತೆ ಗೌರವವನ್ನು ಹೆಚ್ಚಿಸುವಂತಾಗಬೇಕು. ಈ ಕಾರುಣ್ಯ ಆಶ್ರಮದ ಅನುಭವ ಅನಿಸಿಕೆಗಳನ್ನು ತಿಳಿದುಕೊಂಡಿರುವ ತಾವುಗಳು ಈ ಆಶ್ರಮದ ಚನ್ನಬಸಯ್ಯ ಸ್ವಾಮಿಯವರಂತೆ ತಾವೆಲ್ಲರೂ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎನ್ನುವುದು ನಮ್ಮೆಲ್ಲರ ಹಾಗೂ ನಮ್ಮ ಸಂಸ್ಥೆಯ ಆಶಯವಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಈ ಕಾರ್ಯಗಾರದಲ್ಲಿ ಶ್ರೀಧರ ಪಬ್ಲಿಕ್ ಸ್ಕೂಲ್ ಶಿಕ್ಷಕರುಗಳಾದ ಹಾರ್ದಿಕ್ ಪಟೇಲ್. ಎಂ. ಶೇಖರ್. ಛತ್ರಪ್ಪ.ಶರಣಪ್ಪ ಹಿರೇಗೌಡ್ರು. ಹೆಚ್. ಚೈತ್ರ. ಲಾವಣ್ಯ ಹಾಗೂ ಶಾಲೆಯ ವಾಹನಗಳ ಚಾಲಕರುಗಳು ಮತ್ತು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ.ಮರಿಯಪ್ಪ. ಜ್ಯೋತಿ.ಲಕ್ಷ್ಮಿ.ಮೀನಾಕ್ಷಮ್ಮ. ಹಾಗೂ ಶ್ರೀಧರ ಪಬ್ಲಿಕ್ ಸ್ಕೂಲ್ ನ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






