ಬೆಂಗಳೂರು : ಸಮಾಜ ಸೇವೆ ಎಂದರೆ ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲಿ ತೋರಿಸುವವರಲ್ಲಿ ಸಿಎಂ ಗಣೇಶ್ ಗೌಡ ಅವರು ಪ್ರಮುಖರು. ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ಮೂಲದವರಾದ ಇವರು, ಮಂಚೇಗೌಡರ 5ನೇ ಪುತ್ರರಾಗಿದ್ದು, ಕಳೆದ 15 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.

ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಣ್ಣಪುಟ್ಟ ಸೇವಾ ಕಾರ್ಯಗಳಿಂದ ಪ್ರಾರಂಭಿಸಿದ ಇವರ ಪಯಣ, ಇಂದು ರಾಜ್ಯ ಮಟ್ಟದ ಮಾನವ ಹಕ್ಕುಗಳ ಹೋರಾಟದವರೆಗೆ ವಿಸ್ತರಿಸಿದೆ. ಕಳೆದ 11 ವರ್ಷಗಳಿಂದ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ನೊಂದವರ ಧ್ವನಿಯಾಗಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಸುಮಾರು ಆರು ವರ್ಷಗಳ ಹಿಂದೆ ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ, “ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ” ಮೂಲಕ ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದರು. ಇದಕ್ಕೆ ಜೊತೆಯಾಗಿ, ಎಂಟು ತಿಂಗಳ ಹಿಂದೆ “ಡಾ. ನಾಗಲಕ್ಷ್ಮಿ ಚೌದ್ರಿ ಜನಸೇವಾ ಸಂಸ್ಥೆ”ಯನ್ನು ಸ್ಥಾಪಿಸಿ ಜನಸೇವೆಗಾಗಿಯೇ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.

ಈ ಸಂಸ್ಥೆಗಳ ಮೂಲಕ ವರ್ಷಕ್ಕೆ ಕನಿಷ್ಠ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪೌರಕಾರ್ಮಿಕರಿಗೆ ಅಕ್ಕಿ ಹಾಗೂ ಸೀರೆ ವಿತರಣೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳು, ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಗಣ್ಯರಿಗೆ ಪ್ರಶಸ್ತಿ ಪ್ರದಾನ – ಇವು ಸಂಸ್ಥೆಯ ಮುಖ್ಯ ಚಟುವಟಿಕೆಗಳಾಗಿವೆ.
ಇವರ ಕಾರ್ಯಕ್ರಮಗಳ ವಿಶೇಷತೆ ಎಂದರೆ, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಗೌರವಪೂರ್ವಕವಾಗಿ ಸನ್ಮಾನ ಮಾಡುವ ಪರಿಪಾಠ. ಇದರಿಂದ ಸಂಸ್ಥೆಗೆ ವಿಶಿಷ್ಟ ಹೆಗ್ಗಳಿಕೆ ದೊರೆತಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಪ್ರಮುಖ ಅತಿಥಿಗಳು ಹಾಗೂ ನಾಯಕರು ಭಾಗವಹಿಸುವ ಮೂಲಕ ಕಾರ್ಯಕ್ರಮಗಳು ಭಾರೀ ಯಶಸ್ಸು ಕಾಣುತ್ತಿವೆ.
ರಾಜ್ಯಾದ್ಯಂತ ವಿಸ್ತರಿಸಿರುವ ಈ ಸಂಸ್ಥೆಗಳ ಮೂಲಕ ನೂರಾರು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವಲ್ಲಿ ಸಿಎಂ ಗಣೇಶ್ ಗೌಡ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಯಾವುದೇ ಕಳಂಕವಿಲ್ಲದೆ, ನ್ಯಾಯದ ಪರವಾಗಿ ನಿಂತು ಕಾರ್ಯನಿರ್ವಹಿಸುವುದು ಇವರ ವೈಶಿಷ್ಟ್ಯ.
“ನನ್ನನ್ನು ನಂಬಿ ಬರುವವರಿಗೆ ಪ್ರಾಮಾಣಿಕವಾಗಿ ಸಹಾಯ ಮಾಡುವುದು ನನ್ನ ಧ್ಯೇಯ” ಎಂಬ ನಂಬಿಕೆಯನ್ನು ಹೊಂದಿರುವ ಇವರು, ಸಮಾಜದ ಏಳಿಗೆಗಾಗಿ ತಮ್ಮ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ.
ಕಚೇರಿ ವಿಳಾಸ: #4, 6ನೇ ಕ್ರಾಸ್, ತುಂಗಭದ್ರ ರಸ್ತೆ, ಮಾರುತಿನಗರ, ಚಂದ್ರಲೇಔಟ್, ಬೆಂಗಳೂರು.
ಸಮಾಜ ಸೇವೆಯ ಮೂಲಕ ಜನಮನ ಗೆದ್ದಿರುವ ಸಿಎಂ ಗಣೇಶ್ ಗೌಡ ಅವರ ಸೇವಾ ಪಯಣ ಇನ್ನು ಮುಂದುವರಿಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.






