ಗುಡಿಬಂಡೆ ಜೂನ್ 3 ರಂದು ಜಿಲ್ಲಾಧಿಕಾರಿ ಜಿ ಪ್ರಭು ಪಟ್ಟಣದ ತಾಲೂಕ ಕಚೇರಿಗೆ ದಿಢೀರನೆ ತಾಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ರೈತರಿಂದ ದೂರುಗಳು ಸುರಿಮಳೆ ಹರಿದು ಬಂತು ಸಾರ್ವಜನಿಕರು ಅರ್ಜಿ ಸಂಖ್ಯೆ 50 53 57 ಮೊಬೈಲ್ ಆಪ್ ಗೆ ಸೇರ್ಪಡೆ ಮಾಡದೇ ಇರುವ ಬಗ್ಗೆ ಮತ್ತು ಬಗರ್ ಉಕ್ಕುಂ ಸಮಿತಿಯಲ್ಲಿ ಮಂಡನೆಯಾಗಿರುವ ಜಮೀನುಗಳು ದುರಸ್ತಿ ಮಾಡುತ್ತಿಲ್ಲವೆಂದು ಹಾಗೂ ಕೆಲವು ಜಮೀನುಗಳಿಗೆ ದಾರಿ ಇಲ್ಲದೆ ಪರದಾಡುತ್ತಿರುವ ರೈತರು ಜಿಲ್ಲಾಧಿಕಾರಿಗಳಿಗೆ ಗಮನಕ್ಕ ತಂದಾಗ ತಕ್ಷಣವೇ ರೈತರಿಗೆ ಮಂಜೂರಾಗಿರುವ ಜಮೀನಿನಲ್ಲಿ ನಕ್ಷೆಯಲ್ಲಿದ್ದರೆ ಕೂಡಲೇ ದಾರಿ ಬಿಡಿಸಿ ಇಲ್ಲ ಅಂದ ಪಕ್ಷದಲ್ಲಿ ಆ ಕರಾಬ್ ಬಿ ಕರಬ್ ಇದ್ದಲ್ಲೇ ತಕ್ಷಣವೇ ಮುತ್ತಿಗೆ ಹಾಕಿಕೊಂಡು ರಸ್ತೆ ಮಾಡಲು ಅವಕಾಶ ಮಾಡಿಕೊಡಿ ಎಂದು ತಾಸಿಲ್ದಾರರಿಗೆ ತಿಳಿಸಿದರು
ಇನ್ನೂ ಪಸಪಲೋಡು ಬಳಿ ಬರುವ ಗಂಗಮ್ಮ ಗಟ್ಟು ಸುತ್ತಮುತ್ತ ಇರುವ ಸರ್ಕಾರಿ ಜಮೀನುಗಳಿಗೆ ಬಲಾಡ್ಯರ ಪಾಲಾಗುತ್ತಿದ್ದು ಕೂಡಲೇ ಮುತ್ತಿಗೆ ಹಾಕಿಕೊಳ್ಳುವಂತೆ ರೈತರು ಒತ್ತಾಯಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಗಂಗಮ್ಮ ಗಟ್ಟು ಬಳಿ ಬರುವ ಸರ್ಕಾರಿ ಜಮೀನುಗಳ ದಾಖಲಾತಿ ಪಡೆದ ಕೂಡಲೆ ತೆರುವುಗೊಳಿಸಲು ತಾಸಿಲ್ದಾರರಿಗೆ ಸೂಚಿಸಿದರು
ಇನ್ನು ಕೆಲವರು ವಾಪಸಂದ್ರ ಹನಪನಹಳ್ಳಿ ಸಾಗುವಳಿ ಮಾಡುತ್ತಿರುವ ರೈತರು ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಪಟ್ಟಣದ ಇಂತಿಷ್ಟು ಕಿಲೊಮಿಟರ್ ಮಂಜೂರಾತಿಗೆ ಅವಕಾಶವಿಲ್ಲ ಎಂದು ತಿಳಿಸಿದ ತಕ್ಷಣ ಅದೇ ವಾಪಸಂದ್ರ ಹನಪನಹಳ್ಳಿ ಸರ್ವೆ ನಂಬರಲ್ಲಿ ಕೆಲವರಿಗೆ ಮಂಜೂರಾತಿ ನೀಡಿರುತ್ತಾರೆ ನಮಗೆ ಮಂಜೂರಾತಿ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ಮಂಜೂರಾತಿಯಾಗಿರುವ ಕಡತಗಳನ್ನು ವಜಗೊಳಿಸುವಂತೆ ತಿಳಿಸಿದರು ತಾಲೂಕು ತಾಸಿಲ್ದಾರರು ರವಿನ್ಯೂ ಇನ್ಸ್ಪೆಕ್ಟರ್ ಗ್ರಾಮ ಲೆಕ್ಕಾಧಿಕಾರಿಗಳು ಸಿಬ್ಬಂದಿ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು






