ಬೆಂಗಳೂರು,ಮೇ 3 : ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಯುವ ಸೇವಕರಿಗಾಗಿ ಡಾಕ್ಯುಮೆಂಟೇಶನ್ ಹಾಗೂ ತರಬೇತಿ ಶಿಬಿರವನ್ನು ಭಾನುವಾರ ನಗರದ ರಿಚ್ಮಂಡ್ ಟೌನ್ನ ವಿಶ್ಡಮ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಯಿತು.
ಈ ಶಿಬಿರದಲ್ಲಿ ಯುವಕರಿಗೆ ಸಮಾಜ ಸೇವೆಯಲ್ಲಿ ಅಗತ್ಯವಿರುವ ಪ್ರಮುಖ ವಿಷಯಗಳ ಕುರಿತು ಸಮಗ್ರ ತರಬೇತಿ ನೀಡಲಾಯಿತು. ಮುಖ್ಯವಾಗಿ ಡಾಕ್ಯುಮೆಂಟ್ ವ್ಯವಸ್ಥೆ, ಸೆನ್ಸಸ್ (ಜನಗಣತಿ) ಮಾಹಿತಿ, ಸರ್ಕಾರಿ ಯೋಜನೆಗಳ ಅರಿವು ಹಾಗೂ ಮೂಲಭೂತ ದಾಖಲೆಗಳ ಮಹತ್ವ ಕುರಿತು ತಜ್ಞರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಿಲ್ಲಿ ಕೌನ್ಸಿಲ್ ಸದರ್ ಮೌಲಾನಾ ನೌಶಾದ್ ಆಲಮ್ ಅವರು ಮಾತನಾಡಿ, “ಯುವಕರು ಸಮಾಜದಲ್ಲಿ ಬದಲಾವಣೆ ತರಬಲ್ಲ ಶಕ್ತಿ ಹೊಂದಿದ್ದಾರೆ. ಸರಿಯಾದ ಮಾಹಿತಿ ಮತ್ತು ತರಬೇತಿ ಪಡೆದರೆ ಅವರು ಜನರಿಗೆ ಉತ್ತಮ ಸೇವೆ ನೀಡಬಹುದು” ಎಂದು ಹೇಳಿದರು.
ಆಕ್ಟಿವ್ ಬೆಂಗಳೂರು ಫೌಂಡೇಷನ್ ಅಧ್ಯಕ್ಷರಾದ ಶ್ರೀ ತೌಸಿಫ್ ಅಹಮದ್ ಅವರು ಯುವಕರಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಮಿಲ್ಲಿ ಕೌನ್ಸಿಲ್ ನ್ಯಾಷನಲ್ ಅಸಿಸ್ಟಂಟ್ ಜನರಲ್ ಸೆಕ್ರೆಟರಿ ಸುಲೈಮಾನ್ ಖಾನ್ ಹಾಗೂ ಸಮಾಜ ಸೇವಕರಾದ ಜಹೀರ್ ಅಹಮದ್ ಅವರು ಸಹ ತರಬೇತಿ ಯಲ್ಲಿ ಭಾಗವಹಿಸಿ, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಪ್ರಾಯೋಗಿಕ ಮಾಹಿತಿ ಹಂಚಿಕೊಂಡರು.
ಶಿಬಿರದಲ್ಲಿ ಭಾಗವಹಿಸಿದ ಯುವ ಸೇವಕರು ಈ ತರಬೇತಿಯಿಂದ ಸಮಾಜ ಸೇವೆಗೆ ಬೇಕಾದ ಅಗತ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಂಡರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.






