ಸಿರಿಗೇರಿ ಜೂ, 11
ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಿ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಸಿರುಗುಪ್ಪ ಕ್ಷೇತ್ರದ ಶಾಸಕ ಬಿ. ಎಂ. ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಿರಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾತನ ಶಾಲೆಯಲ್ಲಿ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಎರಡು ಕೊಠಡಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ವಿದ್ಯೆ ಕಲಿತ ಮಕ್ಕಳು ಇಡೀ ಜಗತ್ತನ್ನೇ ಗೆಲ್ಲಬಹುದು. ವಿದ್ಯೆ ಇಲ್ಲದಿದ್ದರೆ ಜೀವನವೇ ಶೂನ್ಯ ಎನಿಸುತ್ತದೆ. ಪೋಷಕರು ಮತ್ತು ಶಿಕ್ಷಕರು ಒಗ್ಗೂಡಿ ಮಕ್ಕಳಿಗೆ ಶಿಕ್ಷಣ ನೀಡುವತ್ತ ಗಮನಹರಿಸಬೇಕೆಂದು ತಿಳಿಸಿದರು.
ತದ ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್ ಎಂ ನಾಗರಾಜ್ ಸ್ವಾಮಿ ಸುಮಾರು ಅಂದಾಜು ವೆಚ್ಚ 10 ಲಕ್ಷ ರೂ. ನಲ್ಲಿ ಎರಡು ಶಾಲೆಗಳಿಗೆ ಅನುದಾನ ದೊರೆತಿದೆ. ಗುತ್ತಿಗೆದಾರರು ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳಾದ ಶಿವಕುಮಾರ್, ಶೇಕ್ಷವಲಿ, ಕಾಂಗ್ರೆಸ್ ನ ಪ್ರಮುಖರಾದ ಸಿಎಂ ನಾಗರಾಜ್ ಸ್ವಾಮಿ, ಗರ್ಜಿ ಲಿಂಗಪ್ಪ, ಹೊಳಗುಂದಿ ದ್ಯಾವಣ್ಣ, ಶಿವಪ್ಪ, ತಿಮ್ಮಯ್ಯ,ಬಕಾಡೆ ನಾಗೇಂದ್ರಪ್ಪ, ರಾರಾವಿ ವೆಂಕಟೇಶ್,ಲಕ್ಷ್ಮಣ ಹೆಚ್ ಭಂಡಾರಿ, ರೇಣುಕಪ್ಪ, ಹೆಚ್. ಗಾದಿಲಿಂಗಪ್ಪ, ಪಿಎಸ್ಐ ಶಶಿಧರ್ ನಾಯಕ್, ಅರುಣ್ ಕುಮಾರ್ ದೇಸಾಯಿ, ಆಪ್ತ ಸಹಾಯಕ ಗಣೇಶ್, ಸಿರಿಗೇರಿ ಕ್ರಾಸ್ ಕೆ ಬಿ ಅಭಿಯಂತರಾದ ಶೇಕ್ಷ ವಲಿ, ಗುತ್ತಿಗೆದಾರರ ಗಣೇಶ್ ಸೇರಿದಂತೆ ಸುಮಾರು ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಇದ್ದರು. ಇದೇ ವೇಳೆ ವಿ. ಹನುಮೇಶ ಸಿರಿಗೇರಿ ಗ್ರಾಮದ ಕೆರೆ ಹೂಳೆತ್ತುವಿಕೆ, ಆಧಾರ್ ಕೇಂದ್ರವನ್ನು ತೆರೆಯಲು ಮನವಿ ಪತ್ರ ಸಲ್ಲಿಸಿದರು.






